ಒಂದು ಸುಂದರವಾದ ಹಳ್ಳಿಯಲ್ಲಿ ಕವಿ ಮತ್ತು ರೋಹನ್ ಎಂಬ ಇಬ್ಬರು ಸ್ನೇಹಿತರಿದ್ದರು. ಕವಿ ತುಂಬಾ ಪ್ರಾಮಾಣಿಕನಾಗಿದ್ದನು, ಆದರೆ ರೋಹನ್ ಯಾವಾಗಲೂ ಇತರರಿಗೆ ತೊಂದರೆ ಕೊಟ್ಟು ಮುಂದೆ ಬರಲು ಬಯಸುತ್ತಿದ್ದನು. ಒಂದು ದಿನ ಕವಿಯ ಬಳಿ ಇದ್ದ ಸುಂದರವಾದ ಮರದ ಆಟದ ಸಾಮಗ್ರಿ ರೋಹನ್ ಕಣ್ಣಿಗೆ ಬಿತ್ತು. ಯಾರೂ ಇಲ್ಲದ ಸಮಯದಲ್ಲಿ ಅದನ್ನು ಕಳ್ಳತನ ಮಾಡಬೇಕೆಂದು ರೋಹನ್ ನಿರ್ಧರಿಸಿದನು. ಅವನು ಆ ಆಟದ ಸಾಮಗರಿಯನ್ನು ಕದ್ದು ತನ್ನ ಮನೆಯಲ್ಲಿ ಅಡಗಿಸಿಟ್ಟನು. ಆರಂಭದಲ್ಲಿ ರೋಹನ್ಗೆ ತುಂಬಾ ಖುಷಿಯಾಯಿತು. ಆದರೆ ಕೆಲವೇ ದಿನಗಳಲ್ಲಿ ಅವನ ಜೀವನದಲ್ಲಿ ಬದಲಾವಣೆ ಉಂಟಾಯಿತು. ಅವನು ಎಲ್ಲಿಗೆ ಹೋದರೂ ಒಂದು ರೀತಿಯ ಭಯ ಮತ್ತು ಅಸಮಾಧಾನ ಅವನನ್ನು ಕಾಡತೊಡಗಿತು. ಅವನು ಮಾಡಿದ ತಪ್ಪಿನ ನೆರಳು ಅವನನ್ನು ಬಿಡಲೇ ಇಲ್ಲ. ಸೂರ್ಯನ ಬೆಳಕಿನಲ್ಲಿ ನಡೆಯುವಾಗ ತನ್ನದೇ ನೆರಳು ತನ್ನನ್ನು ನೋಡಿ ನಗುತ್ತಿರುವಂತೆ ಅವನಿಗೆ ಭಾಸವಾಗುತ್ತಿತ್ತು. ಅವನಿಗೆ ನೆಮ್ಮದಿಯಿಂದ ನಿದ್ದೆ ಮಾಡಲು ಅಥವಾ ತಿನ್ನಲು ಸಾಧ್ಯವಾಗಲಿಲ್ಲ. ಕೊನೆಗೆ, ತನ್ನ ತಪ್ಪಿನ ಅರಿವಾಗಿ ರೋಹನ್ ಕವಿಯ ಬಳಿ ಹೋಗಿ ಕ್ಷಮೆ ಕೇಳಿ ಆ ಆಟದ ಸಾಮರಿಯನ್ನು ಹಿಂದಿರುಗಿಸಿದನು. ಆಗ ಮಾತ್ರ ಅವನ ಮನಸ್ಸಿಗೆ ಶಾಂತಿ ಸಿಕ್ಕಿತು.
ರೋಹನ್ ಮಾಡಿದ ತಪ್ಪು ಅವನ ನೆರಳಿನಂತೆ ಅವನನ್ನು ಬೆನ್ನಟ್ಟುತ್ತಲೇ ಇತ್ತು.